ಜೀವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಜೀವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಡಿಸೆಂಬರ್ 1, 2009

random post - 113009

* ಸುಮ್ನೆ ಹೇಳದಲ್ಲ... ಹೋದ್ ಮೂರ್ ತಿಂಗ್ಳಗೆ ಯೆಂತೆನ್ತಲ್ಲ ಆಗೋತು. ಬರ್ತಿ ಮುಖ್ಯ ಅಂದ್ರೆ ನನ್ನ 'social status' single -> committed ಆತು.
* ಸದ್ಯಕ್ಕೆ ನನ್ನ ಅಮೆರಿಕಾದಲ್ಲಿನ ಕ್ಯಾಂಪಿಂಗ್ ತಿರ್ಗಾಟ ಎಲ್ಲ ಮುಗತ್ತು. (for more info check http://undadigunda-travel.blogspot.com )
* ಮೊದ್ಲೆಲ್ಲ ನಾನು 'single', ಅಂತ ಬೇಜಾರ್ ಆಗ್ತಾ ಇತ್ತು. ಈಗ 'engaged' ಆದ್ರೂ ದೂರ ಇರಕ್ಕಲ ಹೇಳಿ ಬೇಜಾರು :-(
* ಸುಮಾರು ಜನಕ್ಕೆ ನಾನು ಒಪ್ಪಿದ್ದು ಮನೆಯವ್ರು ನೋಡಿದ್ ಹುಡ್ಗಿ ಹೇಳಿ ಬರ್ತಿ ಆಶ್ಚರ್ಯ ಆತಡ. ಒಳ್ಳೆ ಕತೆ ಆತು. ಹುಡ್ಗಿ ಮನ್ಸಿಗೆ ಹಿಡ್ಸದು ಮುಖ್ಯ ಅಲ್ದಾ? ನಂಗಂತೂ ಸದ್ಯ ಬಾಳ ಒಳ್ಳೆ ನಿರ್ದಾರ ತಗಂಡಿ ಅಂತ ಅನ್ಸ್ತಾ ಇದ್ದು.
* ಇಲ್ಲಿ ಚಳಿಗಾಲ. ಹೆಚ್ಗೆ ಎಂತು ಆಟ ಎಲ್ಲ ಇಲ್ಲೆ. ಅದಕ್ಕೆ ಗೋಲ್ಫ್ ಆಡಕ್ಕೆ ಶುರು ಮಾಡಿದ್ದಿ. ಒಳ್ಳೆ ಮಜಾ ಆಗ್ತು. ಹೋಗಿ ಸಮಾ ಬಾರ್ಸದು, ಚೆಂಡಿಗೆ. ಯಾರ್ ಮೇಲಾರು ಸಿಟ್ಟಿದ್ರೆ ಈ ಆಟ ನಿಂಗ ಆಡಕ್ಕು.
* ಸುಮಾರು ಜನ ಕೇಳ್ತಾ ಇದ್ದ, "ನೀನು ಬ್ಲಾಗ್ ಬರ್ಯದು ಬಿಟ್ ಬಿಟ್ಯ?" ಹೇಳ್ಕೊತ. ನಾನು ಜನ ಒದಕ್ಕು ಹೇಳಿ ಬ್ಲಾಗ್ ಬರದ್ದು ಯಾವಾಗ ಹೇಳಿ? ಮೊದ್ಲೇ ಮನ್ಸ್ ಬಂದ್ ಗಿರಾಕಿ. ಎಂತಾರು ಬರ್ಯಕ್ಕು ಅನ್ಸಿರೆ ಬರ್ಯದಪ. ನೋಡನ, ಯಾವತ್ತಾರು ಒಂದ್ ದಿವ್ಸ ನಾನು ಸುಮಾರು ಉದ್ದ ಕಥೆ ಕವನ ಬರಿತ್ನೇನ, ಯಾರಿಗ್ ಗೊತಿದು.


ಬುಧವಾರ, ಆಗಸ್ಟ್ 19, 2009

random post - 081809

* ಇಲ್ಲಿ ಬೇಸಿಗೆ ಕಳೆದು ಹೋಗ್ತಾ ಇದ್ದು. ಸುಮಾರಷ್ಟು ಜಾಗ ನೋಡದು ಬಾಕಿ ಉಳದ್ದು, ಬೇಗ ಬೇಗ ನೋಡಕ್ಕು.
* ಅಕ್ಟೋಬರ್ ನಲ್ಲಿ ಭಾರತಕ್ಕೆ ಹೋಗಿ ಬರಕ್ಕು.
* ಆಗಸ್ಟ್ 09 ನೆ ತಾರೀಕು, ಬೇ ಏರಿಯ ಕನ್ನಡ ಬ್ಲಾಗ್ಗರ್ಸ್ ಮೀಟ್ ಇತ್ತು. ಸುಮಾರು ಜನ ಕನ್ನಡದಲ್ಲಿ ಬರಿಯೋರನ್ನೆಲ್ಲ ಬೇಟಿ ಮಾಡಿ ಖುಷಿ ಆತು.
* ಸ್ವಲ್ಪ ಕೆಲಸ ಕಡಮೆ ಇದ್ದು, ಅದೇ ಹೆಳೆಲಿ ಸುಮಾರು ಈಜು ಹೊಡಿಯದು, ಗರಡಿ ಮನೆ ಕಸರತ್ತು ಎಲ್ಲ ಮಾಡಕ್ಕೆ ಸಮಯ ಸಿಕ್ಕಿದ್ದು.
* ಮೊನ್ನಿತ್ಲಗೆ ಯೋಸೆಮಿತೆ ಗೆ ಹೋಗಿ "Half Dome" ಕಲ್ಲಿನ ಬಂಡೆ ಹತ್ತಿಳ್ದು ಬಂದಿ (ಎರಡನೇ ಸಲ)
* ಇಷ್ಟು ದಿನ ಆಡಿದ್ದಕ್ಕೆ ವಾಲಿಬಾಲ್ ಆಟ ಸ್ವಲ್ಪ ಚೆನಾಗೈದು.
* ಗೆಳೆಯ ಪ್ರಸಾದ್ ಮದ್ವೆ ಆಗ್ತ ಇದ್ದ, ಅದು ಇದು ಹೇಳಿ ನಂಗು ತಲೆ ಕೆಡಸಿ ನನ್ನೂ ಮದ್ವೆ ಮಾಡ್ಕ್ಯ, ವರ್ಷಾತು ಹೇಳಿ ನಂಬ್ಸಿದ್ದ.. ನೋಡಕ್ಕು ಎಂತ ಕತೆ ಹೇಳಿ.
* ಮುಂದಿನ ವರ್ಷದ ಬುಡದಲ್ಲಿ ವಾಪಸ್ ಹೊಂಟಿ ನಾನು ಭಾರತಕ್ಕೆ. (ಫುಲ್ ಟೈಮ್)
* MS (ನನ್ನ ಗೆಳೆಯ, ರೂಂಮೇಟ್) ಒಳ್ಳೆ ಅಡ್ಗೆ ಮಾಡ್ತ, ಅದಕ್ಕೆ ದಿನಾನು ಒಳ್ಳೆ ಊಟ :-)

ಮಂಗಳವಾರ, ಜುಲೈ 21, 2009

KGR! a memory now :(

A teacher, a friend, a guide and a well wisher, these are the few attributes I will always be attaching with one of my favorite teacher, KGR (KG Ravindra), who passed away on July 15th, 2009. I can't write about him in few words here, and the more I write, I may end up in tears thinking of the fact that he is not among us in this mortal world now.



* Sir! miss you.. You will always be alive in my memories for sure. (KGR with Nagendra Bhat, photos taken in Jan, 2008)







* Madam, Vijeth, Vibha, I don't have any words to console you at the moment :(( [In the photo: Me with KGR family, Dec 2007]


ಸೋಮವಾರ, ಸೆಪ್ಟೆಂಬರ್ 22, 2008

ನಂದೊಂದು post ಇರ್ಲಿ

ನಾನು ಯಾವಾಗ ಬದಲಾದೆ ಗೊತ್ತಿಲ್ಲ, ಆದರೆ ಬದಲಾಗಿರೋದು ನಿಜ. ನಾನು ಇತ್ತೀಚಿಗೆ (ಸುಮಾರು ವರ್ಷಗಳಿಂದ) ಯಾವುದೇ ವಿಷಯದಲ್ಲೂ ಪ್ರಕೃತಿಯನ್ನು, ಪ್ರಕೃತಿಯ ನಿಯಮಗಳನ್ನು ನಂಬುತ್ತೇನೆ. ನನ್ನ ಪ್ರಕಾರ ದೇವರು, ಧರ್ಮ ಇವೆಲ್ಲ, ನಾವು ವಿಕಾಸವಾಗುವಾಗ ಉತ್ಪಾದನೆಗೊಂಡ sideproduct ಗಳು, ಮಾನವ ಮತ್ತೊಂದು ಪ್ರಾಣಿ, ನಮ್ಮ ತಿಳುವಳಿಕೆಗಳ ಪ್ರಕಾರ ಸ್ವಲ್ಪ ಹೆಚ್ಚಿಗೆ ವಿಕಾಸವಾದ ಒಂದು ಪ್ರಾಣಿ ಅಷ್ಟೆ. ಪ್ರಕೃತಿ ಮಾತೆಯೇ ನನಗೆ ನಿಮಗೆ ಮತ್ತು ಆ ದೇವರಿಗೂ ಮಹಾ ತಾಯಿ.

ಸರಿ ಇದೆಲ್ಲ ಪುರಾಣ ಯಾಕೆ ಅಂತಿರಾ? ಬೇಕು ರೀ!! ಈ ಬಾಂಬ್ ಬ್ಲಾಸ್ಟ್, ಒರಿಸ್ಸಾ ಗಲಾಟೆ, ಮಂಗಳೂರು ಗಲಾಟೆ, ಇತ್ಯಾದಿ ಗಳ ಮೇಲೆ ಒಬ್ರ ಮೇಲೊಬ್ರು ಅವರವರ ಇಷ್ಟ ಬಂದ ಹಾಗೆ ಹೇಳಿಕೆ ಕೊಡ್ತಾ ಇದಾರೆ, ಇಷ್ಟ ಬಂದ ಹಾಗೆ ಬರಿತಾರೆ, ಅದಕ್ಕೆ ನಂದೂ ಒಂದು ಇರ್ಲಿ ಅಂಥ ಇಷ್ಟೆಲ್ಲಾ ಪೀಠಿಕೆ.

ಅಹಿಂಸೆ ಅನ್ನೋದು ಒಂದು ಪರಿಕಲ್ಪನೆ ಅಷ್ಟೆ. ಅದು ನಿಜವಾಗಿಯು ಸರಿಯಲ್ಲ. ನಿಜ, ನನಗೂ ಶಾಂತಿ ಇರೋಅಲ್ಲಿ, ಅಹಿಂಸೆ ಇರೋ ಅಲ್ಲಿ ಬದಕೊಕೆ ಇಷ್ಟ, ಅದರೇನು ಮಾಡೋದು, ಅದು ಹಿಂದೂ ಸಾದ್ಯ ಇರ್ಲಿಲ್ಲ, ಮುಂದೂ ಸಾದ್ಯ ಇಲ್ಲ. ಯೋಚನೆ ಮಾಡಿ, ನಮ್ಮ ಮಾನವ ಜನಾಂಗ ಬರಿ 50 ರಿಂದ 100 ಕೋಟಿ ಇರೋ ಆವಾಗಲೇ ನಾವು ಶಾಂತಿ ಇಂದ ಬದಕಿಲ್ಲ, ಈಗ ಭೂಮಿ ಮೆಲಿರೋದೆಲ್ಲ ತಿಂದು ಒಂದೊಂದೇ ಪ್ರಾಣಿ ಗಳ ಗತಿ ಕಾಣಿಸಿ ನಾವು ಮಾತ್ರ 600 ಕೋಟಿಗೂ ಮಿಗಿಲಾಗಿ ಬೆಳೆದು, ಇರೋ ಬರೋ ಶಕ್ತಿ ಮೂಲಗಳೆಲ್ಲ ಖಾಲಿ ಆಗುತ್ತಾ ಬಂದಾಗ, ಶಾಂತಿ ಇಂದ ಇರಲಿಕ್ಕೆ ಸಾದ್ಯಾನ? ಪ್ರಕೃತಿ ನಿಯಮದಂತೆ 'survival of fittest', ಯಾರು ಬಲಶಾಲಿಗಳೋ ಅವರಿಗೆ ಜಯ. ಅದು ಒಂದು ಧರ್ಮ ಇರ್ಬೋದು, ಭಾಷೆ ಇರ್ಬೋದು, ದೇಶ ಇರ್ಬೋದು, ಅಥವಾ ಒಬ್ಬ ಸಾಮನ್ಯ ಮನುಷ್ಯನೆ ಇರ್ಬೋದು. (ಬಲಶಾಲಿ ಅನ್ನೋದನ್ನ ನಿರ್ದರಿಸೋ ಬಗೆ ಬೇರೆ ಬೇರೆ ಇರಬಹುದು, ಎಷ್ಟು ಜನ ಉಪಯೋಗಿಸುತ್ತಾರೆ (ಭಾಷೆಗೆ), ಎಷ್ಟು ಜನ ನಂಬುತ್ತಾರೆ(ಧರ್ಮಕ್ಕೆ), ಎಷ್ಟು ಜನಸಂಖ್ಯೆ ಅಥವಾ ಎಷ್ಟು ನೈಸರ್ಗಿಕ ಸಂಪತ್ತು ಇದೆ (ದೇಶಕ್ಕೆ), ಎಷ್ಟು ದುಡ್ಡಿದೆ ಅಥವಾ ಆರೋಗ್ಯ (ಒಂದು ಜೀವಿಗೆ)).

"ದಿನ ಸಾಯುವವರಿಗೆ ಅಳುವವರು ಯಾರು" ಅನ್ನೋ ಗಾದೆ ಮಾತಿನಂತೆ ಸಾವಿಗೆ/ಹಿಂಸೆಗೆ ನಾವೆಲ್ಲ ಎಷ್ಟು ಒಗ್ಗಿ ಹೋಗಿದಿವಿ. ಬಾಂಬ್ ಬ್ಲಾಸ್ಟ್ ಆಗುತ್ತೆ, ಮರುದಿನ ಎಲ್ಲರೂ ಕಿರ್ಚ್ಕೊತಾರೆ, ಅದರ ಮರುದಿನ ಎಲ್ಲರೂ ಅವರವರ ಕೆಲಸಕ್ಕೆ ಹಾಜರ್. ಬಾವನೆಗಳು ಹೊಟ್ಟೆ ತುಂಬ್ಸೋಲ್ವಲ್ಲ! ಈ ರಾಜಕಾರಣಿ ಗಳಿಗೆ ಬೇರೆ ಕೆಲಸ ಇಲ್ಲ, ಯಾರೋ ಸತ್ರೆ ಅಲ್ಲಿ ಹೋಗಿ ಪ್ರೆಸ್ ತೆಗೆಯೋ ಫೋಟೋಕ್ಕೆ ಪೋಸ್ ಕೊಟ್ಟು, ಸರ್ಕಾರ ರಾಜಿನಾಮೆ ಕೊಡ್ಬೇಕು ಅಂತ ಒಂದು ಹೇಳಿಕೆ ಕೊಟ್ಟು, ಅಲ್ಲಿ ಒಂದು ಬಂದ್ ಮಾಡ್ಸಿ, ಗಲಾಟೆ ಮಾಡ್ಸಿ, ಬದಕಿರೋ ಜನ ಸಾಮಾನ್ಯರಿಗೂ ಹಿಂಸೆ ಕೊಟ್ಟು, ವಾಪಸ್ ಮನೆಗೆ ಹೋಗಿ ಸೊಂಪು ತಿಂದು, ಗಡದ್ದಾಗಿ ನಿದ್ದೆ ಹೊಡಿತಾರೆ. ಇವರೇ ಸರ್ಕಾರ ನೆಡ್ಸ್ತ ಇದ್ರೆ ಉಸ್ರು ಹೊರಡ್ತಾ ಇರ್ಲಿಲ್ಲ ಗಲಾಟೆಗಳಾಗಿದ್ರೆ. ಅಬ್ಬಬ್ಬ ಅಂದ್ರೆ ನಮ್ಮ ಬಡಪಾಯಿ ಪೋಲಿಸ್ ಇಲಾಖೆ ಅವ್ರು ಕೆಲವೊಬ್ರು ಸ್ವಲ್ಪ ದಿನ 'suspension' ನಲ್ಲಿ ಹೋಗಬೇಕಾಗುತ್ತೆ ಅಷ್ಟೆ. ಈ ಬಂದ್, ಈ ಚುನಾವಣೆ, ಇವೆಲ್ಲ ನಮ್ಮಂತ ಕಂದಾಯ ಕಟ್ಟೋ ಅವರ ದುಡ್ಡನ್ನು ಪೋಲು ಮಾಡುವ ಕೆಲಸ ಅಂಥ ಅವರಿಗೆ ಅನಿಸೋದೇ ಇಲ್ಲ.

ಎಲ್ಲರೂ ಬರಿ ಅವರವರ ಸ್ವಂತಕ್ಕೆ ನೋಡಿಕೊಳ್ಳುವವರೇ, ಪ್ರಾಣಿಗಳ ತರಹ.

ನಾನು ಹೊಡೆದಾಟಗಳನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ದೂರದಲ್ಲಿ ಬರಿ ನಿಂತು ನೋಡಿ ಮಜಾ ತಗೊಳೋಅವರಿಗೆ ಎಷ್ಟು ಕುಲ್ಲಕ ಕಾರಣ ಅನಿಸುತ್ತೆ, ಹೊಡೆದಾಟ ಮಾಡುತ್ತಿದ್ದವರಿಗೆ ಅದು ಅಳಿವು ಉಳಿವಿನ ಪ್ರಶ್ನೆ ಆಗಿರಬಹುದು. ಹೇಳೋದು ಬಹು ಸುಲಬ, "ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ಚಾಚು" ಅಂಥ. its sooo unnatural ಅನ್ಸೊಲ್ವಾ? ನಾನೆ ಆದರೆ ತಿರಗಿ ಎರಡೂ ಕೆನ್ನೆಗೆ ಬಾರಿಸ್ತಿನಿ. ನನ್ನ ಪ್ರಕಾರ 100 ಕ್ಕೆ 99 ಜನ ವಾಪಸ್ ಹೊಡಿತಾರೆ. ಇನ್ನೊಬ್ಬನಿಗೆ ಕೈಲಿ ಆಗೋಲ್ಲ ಅದಕ್ಕೆ "ನಾನು ಗಾಂಧಿವಾದಿ" ಅನ್ನುತ್ತಾನೆ ಅಷ್ಟೆ.

"ಏನೋ ಮಗನೆ, ಹಿಂಸೆಗೆ ಪ್ರಚೋದನೆ ಕೊಡ್ತಾ ಇದ್ದೀಯ?" ಅಂತ ನೀವು ಕೇಳಿದರೆ, ನನ್ನುತ್ತರ "ಇಲ್ಲ, ಆದರೆ ಹಿಂಸೆ ನಮ್ಮ ಜೀವನದ ಅವಿಬಾಜ್ಯ ಅಂಗ, ನಾವೇ ಕಂಡು ಹಿಡಿದ ಗನ್/ಬಾಂಬ್ ಇದೆ, ಅದಕ್ಕೆ ಅದು ಉಪಯೋಗಿಸಲ್ಪಡುತ್ತಿದೆ, ಇಲ್ದೆ ಹೋದ್ರೆ, ಕತ್ತಿ, ಖಡ್ಗ, ಕಲ್ಲು, ಮುತದವು ಗಳಲ್ಲೇ ಹೊಡದಾಡ್ತಿದ್ವಿ. ಪ್ರತಿಯೊಬ್ಬರು ಅವರವರ ಆಸ್ತಿತ್ವಕ್ಕೆ, ಅವರವರ ನಂಬಿಕೆಯ ಉಳಿವಿಗೆ ಹೊಡೆದಾಡಲೇ ಬೇಕು". ನನಗೆ ಭಾರತ ಇಷ್ಟ, ಬೇರೆ ಎಲ್ಲ ದೇಶಗಳು ನನಗೆ ಪರದೇಶವಾಗೆ ಇರುತ್ತದೆ. ಅಂತೆಯೇ, ಯಾವತ್ತಿಗಾದರು ಭಾರತದ ಮೇಲೆ ಯಾರೋ ಯುದ್ದ ಮಾಡಿದರೆ, ನಾನು ಹೊಡೆದಾಡಲು ತಯಾರು, ಯಾಕೆಂದರೆ ನಾನು ಹುಟ್ಟಿದಾಗಿನಿಂದ ಭಾರತಾಂಬೆ, ಭಾರತ ಮಾತೆ ಎಂದು ಓದಿದ್ದೇನೆ, ಅಮ್ಮನ ರಕ್ಷಣೆಗೆ ನಾನು ಸಿದ್ದ. ಅಂತೆಯೇ ನನ್ನ ಬೇರೆ ಹಲವಾರು ನಂಬಿಕೆಗಳು. ನನ್ನ ರೀತಿಯೇ ಪಾಕಿಸ್ತಾನದ ಪ್ರಜೆ ಕೂಡ ಅವನ ದೇಶದ ಬಗ್ಗೆ ಈ ಬಾವನೆ ಗಳನ್ನು ಹೊಂದಿರುತ್ತಾನೆ. ಅದೂ ಕೂಡ ತಪ್ಪಲ್ಲ. its so natural that animals will have affinity to where they belong. ಅಲ್ಲಿ ಧರ್ಮ ಕೂಡ ಕೆಲ್ಸಕ್ಕೆ ಬರಲ್ಲ.. ನಾವು ಒಂದೊಂದು ಧರ್ಮ ಪಾಲಿಸಬಹುದು, ಆದರೆ ಅದರಲ್ಲಿ ಏನು ಹೇಳಿದೆ ಅನ್ನೋದು ಮುಖ್ಯ ಆಗೋದೇ ಇಲ್ಲ, ನಾವು ಏನು ಅನ್ಕೊತಾ ಇದಿವೋ ಅದು ಮುಖ್ಯ ಆಗುತ್ತೆ. ನನ್ನ ಪ್ರಕಾರ ಭಾರತ ಒಂದು ದೇಶ ಆಗಿರೋದಕ್ಕೆ ಕಾರಣ ಹಿಂದೂ ಧರ್ಮ, ಆದ್ದರಿಂದ ನನಗೆ ಅದು ಮುಖ್ಯ ಆಗುತ್ತೆ. ಅದಿಲ್ಲ ಅಂದ್ರೆ ಯಾರೋ ಉತ್ತರ ಪ್ರದೇಶದಲ್ಲಿ ಇರೋ ಒಬ್ಬ ನನಗೆನಾಗ ಬೇಕು? ನನಗೆ ಹಿಂದಿ ಬರಲ್ಲ, ಅವನಿಗೆ ಕನ್ನಡ ಬರಲ್ಲ, ನನ್ನ ಮನೇಲಿ ಆಚರಿಸೋ ಹಬ್ಬಗಳೇ ಬೇರೆ, ಅವನ ಸಂಸ್ಕೃತಿನೆ ಬೇರೆ. ಆದರೆ ನಾವು ಒಂದಾಗಿರೋಕ್ಕೆ, ಬೇರೆ ದೇಶಕ್ಕೆ ಬಂದಾಗ ಅವನು ಬಾರತೀಯ ಅನ್ನೋಕೆ, ಹಿಂದೂ ದರ್ಮ ಕಾರಣ. now don't tell me that because british ruled us for 100+ years we became one country, thats a joke, british ruled 20-30 more such countries, why didn't we all become one country called UQ (under queen) country? ಇದು ನನ್ನ ದಿಟ್ಟ ನಂಬಿಕೆ. ಕಾಶ್ಮೀರದಲ್ಲಿ ಸ್ವಲ್ಪ ಭೂಮಿ ವಿಚಾರಕ್ಕೆ ಗಲಾಟೆ, ಸುಮ್ನೆ ಯಾಕೆ ಬೇಕು, ಅಲ್ಲಿ ಜನರಿಗೆ ಬಿಡಬೇಕು ಅವರ ವಿಚಾರನ ಅಂಥ ಕೆಲವೊಬ್ರು ಹೇಳೋದು ಕೇಳ್ದೆ. ಎಂಥಾ ತಮಾಷೆ, ಭಾರತ ಸ್ವಾತಂತ್ರ ಸಂಗ್ರಾಮ ಯಾಕಾಯ್ತು? ಕಾರ್ಗಿಲ್ ಯುದ್ದ ಯಾಕೆ ಬೇಕಿತ್ತು? "ಸ್ವಲ್ಪ ಭೂಮಿ ತಾನೆ, ಸುಮ್ನೆ ಕೊಡ್ಬೋದಿತ್ತು. ಚೀನಾ ಜೊತೆ ಯಾಕೆ ಗಲಾಟೆ, ಏನೋ ಸ್ವಲ್ಪ ಗಡಿ ಈ ಕಡೆ ಅವ್ರು ಬಂದು ಬಿಟ್ಟಿದಾರೆ, ಏನೋ ಸ್ವಲ್ಪ adjust ಮಾಡ್ಕೊಳೋಣ, ಅವ್ರಿಗೆ ಬಿಟ್ಟು ಬಿಡಿ, ಬೆಳಗಾವಿಲಿ ಯಾಕ್ರೀ ಹೊಡೆದಾಟ, ಬರಿ ಒಂದು ಜಿಲ್ಲೆ ಅವ್ರಿಗೆ ಬೇಕಂತೆ, ಕೊಡ್ರಿ". ನಾನು ಒಪ್ಪಲ್ಲ. ಈ ಎಲ್ಲ ಜಾಗಗಳ ಬಗ್ಗೆ ನನಗೆ ಒಂದು ಒಲವಿದೆ. ಆ ಒಲವಿಗಾಗಿ ನನ್ನ ಬೆಂಬಲ ಇದೆ. ಅದೇ ರೀತಿ ನನ್ನ ಬೆಂಬಲ ಹಿಂದೂ ದರ್ಮಕ್ಕಿದೆ. ನನಗೆ ಗೊತ್ತು, ಈ ಜಾತಿ ದರ್ಮ ದೇಶ ಎಲ್ಲ ನಾವೇ ಮಾಡಿಕೊಂಡ ಒಂದು ನಿಯಮ ಅಂತ, ಅವೆಲ್ಲ ಬಿಟ್ಟು ಬಿಟ್ರೆ ಜೀವನದಲ್ಲಿ ಇನ್ನೇನಿದೆ, ದಿನ ಬೆಳ್ಳಿಗ್ಗೆ ಏಳು, ತಿನ್ನು, ದುಡಿ, ತಿನ್ನು, ಅವಕಾಶ ಆದ್ರೆ ಬೇರೆ ಗೆಳೆಯರನ್ನ ಬೇಟಿ ಆಗು, ತಿನ್ನು, ಕುಡಿ, (ಅವಕಾಶ ಆದ್ರೆ, ಮದುವೆ ಆಗಿದ್ರೆ, ಮತ್ತೊಂದು ಜೀವಿಯ ಜೊತೆ) ಮಲಗು. ಇದು ಬೇರೆ ಯಾವುದೇ ಸಸ್ತನಿ ಪ್ರಾಣಿಯ ದಿನಚರಿಯಿಂದ ಏನು ವ್ಯತ್ಯಾಸ??

ಅದಕ್ಕೆ ನನಗೆ ಮತಾಂತರ ತಪ್ಪು ಅನಿಸುತ್ತೆ, ಇಸ್ಲಾಂ ಮುಲಬೂತವಾದ ಇಷ್ಟ ಆಗೋಲ್ಲ. ಇನ್ನೂ ನೂರು, ಇನ್ನೂರು, ಸಾವಿರ ವರ್ಷಗಳ ಕಾಲ ಭಾರತ ಭಾರತವಾಗೆ ಇರಬೇಕು ಅಂದ್ರೆ ಇವು ನಿಲ್ಲಬೇಕು, ಹಿಂದೂ ಧರ್ಮ ಗಟ್ಟಿಯಾಗ ಬೇಕು. ಇದು ನನ್ನ ಸದ್ಯದ ಅಚಲ ನಂಬಿಕೆ. ಯಾವತ್ತಿಗೂ ನಾನು ತಿಳಿದವರ ಮಾತುಗಳ ಬಗ್ಗೆ ಗೌರವದಿಂದ ನೋಡಿದ್ದೇನೆ, ನಿಮ್ಮ ಅನಿಸಿಕೆ ತಿಳಿಸಿ, ನನ್ನ ತಪ್ಪಿದ್ದರೆ, ಮೊದಲೇ ದಡ್ಡ ಶಿಕಾಮಣಿ ನಾನು, ಕಲಿತು ಕೊಳ್ಳಲು ಆದರೆ ತಿದ್ದಿಕೊಳ್ಳುತ್ತೇನೆ.

[ಸಶೇಷ]

ಮಂಗಳವಾರ, ಆಗಸ್ಟ್ 26, 2008

ಕಳೆದು ಹೋದ ಆರು ತಿಂಗಳು

ಹೇಳ್ದೆ ಕೇಳ್ದೆ ಆರು ತಿಂಗ್ಳಾಗೊತು! ಮಾಡಿದ್ದೆಂತಪ ಕೇಳಿರೆ ಯೆಂತೂ ಇಲ್ಲೆ.. ಹೊಗ್ಲಿ ಡಾಲರಗೆ ಸಂಬ್ಳ ತಗತ್ತೆ ದುಡ್ಡಾರು ಮಾಡಿದ್ಯೇನ ಕೇಳಿರೆ ಅದೂ ಇಲ್ಲೆ.. ಬರಿ ಸಾಲ. ಸಂಬ್ಳದಗೆ ಸೂರಿಗೆ, ಹೊಟ್ಟಿಗೆ ಸಾಕಾಗಿ ಹೊಗ್ತು. ಬಟ್ಟೆಗೂ ಬೇಕಿತ್ತು, ಆದ್ರೆ ಅದೆ ಹಳೆ ಬಟ್ಟೆ ಆಕಡಿಗೆ washerಗೆ, ಈ ಕಡಿಗೆ dryerಗೆ ಹಾಕಿ, ಉಡದು. ಅದು ಬಿಟ್ರೆ, ಇದ್ದಲ, ಮನಿಗೆ ಬಾಡ್ಗೆ, ಕಾರಿಗೆ ತಿಂಗ್ಳಾ ಬಾಬ್ತು.. ಇಂಟೆರ್ನೆಟ್ ಬಿಲ್ಲು, ಕರೆಂಟ್ ಬಿಲ್ಲು.. ಸುಮ್ನೆ ಹೇಳದಲ್ಲ ತಮ.. ಜನ ಬರಿ ಎಷ್ಟು ದುಡದ್ದ ನೊಡ್ತಾ ಬಿಟ್ರೆ, ಎಷ್ಟು ಖರ್ಚು ಮಾಡ್ತ ನೊಡದೆ ಇಲ್ಲೆ :O ಹೊಗ್ಲಿ, ಬಿಟ್ಹಾಕು! ಈ ದುಡ್ಡಿನ ವಿಚಾರ ತೆಗ್ದ್ರೆ ಯೆಂಗೆ ಒಂಥರಾ ಆಗ್ತು, ಬೇರೆ ವಿಚಾರಕ್ಕೆ ಬರನ.

ಈ ದೇಶಕ್ಕೆ ಬಂದು ಆರು ತಿಂಗ್ಳಗೆ ಒಳ್ಳೆ ಸಾದನೆ ಅಂದ್ರೆ,
* ice skiing ಮಾಡಿದ್ದು,
* skydiving ಮಾಡಿದ್ದು,
* Grand canyon ನಲ್ಲಿ, south rim ಇಂದ north rim ಗೆ ನೆಡ್ಕಂಡು ಹೋಗಿದ್ದು.
* Yosemite ನಲ್ಲಿ, Halfdome ಕಲ್ಲಿನ ಗುಡ್ಡನ ಒಂದೆ ದಿನ ಹತ್ತಿ ಇಳದಿದ್ದು.

ಆದು ಬಿಟ್ರೆ ಹಿಂಗೆ ಇರ್ಲಿ ಹೇಳಿ ಎರ್ಡುಗಾಲಿ skateboard ಕಲ್ತಿದ್ದಿ.. TT ಆಡಕ್ಕು ಹೇಳಿ ಒಂದು ಕ್ಲಬ್ ಗೆ ಸದಸ್ಯನಾಯ್ದಿ. ಬಿಟ್ರೆ ಬರಿ ಕೆಲ್ಸ ಕೆಲ್ಸ.

ಶನಿವಾರ, ಜುಲೈ 12, 2008

/whois /me

i have read many blogs of friends/random ppl about writing 'whoam i' type of posts. Yes! i understand. This is because importance to 'identity' itself is been great these days. Many people think a lot about all these factors, what is the goal of life, am i doing enough, am i doing it right?, how much better can i get? what are my roots? is it correct for me to do this? well, lot of questions and notice that 'i' is involved in everything. afterall, 'i' is 'me' for everyone, and 'me' is a very important factor.

I have noticed one thing. This 'whoam i' type of questions bothers people who change their life style, who shifts environments, like people coming from village to town, town to city, city to metro, metro to travel abroad etc.. If you stick to one type of environment, you are -almost- not bothered about all these things because, you are always used to stuffs surrounding you. Mostly thats the reason why elders keep complaining about the change in culture, youth going out of control, we complaining that current day kids are not like us (when we were kids), we say they miss 'growing up in 80s' factor etc. Well, everybody has something or other to say about change, and obviously change is inevitable.

i avoid considering questions which takes some energy to give answer, like "whoam i?" (to your knowledge, energy and giving answer has direct relationship, ofcourse because brain is involved, which takes ~40-50% of bloodsupply, and equal or more amount of energy than whole other body parts combined). I try to think less, and be lazy most of the time. hence, i prefer to go with my instincts. I don't think about future much, hence no savings or anything, similarly maths is getting out of my head gradually, and so i don't take any worry about investment, returns, finance management etc. I don't like options, i hate buffet lunch, because i feel like eating everything, and i can't decide whats good for me.. i would like to order 'same for me' or 'make it two' type-ish when i goto restaurants, (ofcourse i order drinks myself, as that doesn't require second thoughts :p)

but today, i ate bit more, and had slept for some extra hours, so had some energy to spare on brain cycles. also it was sometime since i wrote something here.. so took up this question "Whoam I?", "where can i relate myself".

unlike many people i see, questioning themself like this and ending a post without concluding, i know well what i am. well, i know by heart, by head (and even by body :O) i belong to village, to be specific, belong to 'malenaDu'. I grew up playing with trees, eating raw fruits plucked directly from tree, climbing hills, playing chinni-daanDu, bugri, goli, kusti (well, this was unofficial game in our primary school :O), marakothi and many more similar games. I never liked going to school as a kid. Whole of our village at that time had just one TV (it had ~20 houses), i never had TV at home till i entered jnv. We used to have lot of time, and it was complete fun. 1-4th, my school was nearby, just 0.5miles from home. in 5th it was 1miles away, and 4months it used to rain a lot, so we used to goto school covered in plastic covers, i think one year i got a raincoat too, but i tore it, hence not got any more raincoats.

Life took a serious turn when i got selected in jnv entrance test. (well i wrote the test for not passing it :p)

next 7 years i spent in JNVGajanur, and it takes a whole new post rather a book to tell about that life. i learnt a lot in jnv. not just syllabus, but also sports, and -computers-,

i will stop here about what happened with me in past and try to get answer to 'what am i or who am i', type of question. Well, i grew up as a kid without much restriction at home, hence learnt responsibility, but never learnt working under somebody else. I can respect someone for their capability, but i don't like the idea of working under someone full time. taking challenges was always a thing i liked. I am a listener most of the time, don't like arguing, i have my own explaination, way to do things. I don't get bothered if people say something about my style, my dress, my language, or anything. i like world peace, like a quite place, my mood swings very fast, but overall avg stays well within normal to happy state. like travelling, nature always amazes me, and keeps reminding me how small i am.. love to learn new things, try out new things. never get bothered because my communication skills are bad, or i am not so good technically. i am not an atheist, but can't say that i believe in god, or follow a religion. I like Hinduism, just because other religions never attracted me and never was required for me. i am open with my eating and drinking habbits and never say no to experimenting, the food i don't like are red meat and bland food.

if you don't know me, you may feel i am little reserved and not very talkative.. but be aware, if you are well within my close circle, you will be saying 'nilsale' (ie, stop it man) most of the time.

well, my energy is almost compensated for the day. i will stop now.. drop me a comment if you need more :D (well, you can comment even otherwise)

ಶನಿವಾರ, ಜೂನ್ 28, 2008

ನಿಮ್ಮ ಕಂಪನಿಗೆ ಅಂತ ತಗೋತಿನಿ

ಇವತ್ತು ಆಫೀಸ್ ನಿಂದ ಹೊರಡ್ತಾ ಇದ್ದ ಹಾಗೆ, ಅಲ್ಲೆ ನಮ್ಮ CTO ಗೆ ತುಂಬಾ ಬೇಕಾದವರ ಮನೆಯಿಂದ ಫೋನು, ನಮ್ಮನೆಗೆ ಬಾ, ಮಸಾಲಾ ಪುರಿ ರೆಡಿ ಇದೆ ಅಂತ. ಅವ್ರು ನನ್ನನ್ನ ಕೇಳಿದ್ರು ಹೋಗೊಣವಾ? ಅಂತ, ಎಂಗೆಂತ ಮಳ್ಳ ಹೊಗ್ದೆ ಇರಕ್ಕೆ, ಬಿಟ್ಟಿ ತಿನ್ನಕ್ಕೆ ಸಿಕ್ರೆ ಎತ್ಲಗಾದ್ರು ಹೋಗಕ್ಕೆ ರೆಡಿ ಆನು, ತೀರ ತಲೆ ಹೊಗ ಕೆಲ್ಸ ಎಂತು ಬಾಕಿ ಇರ್ಲೆ, ಅದಕ್ಕೆ ಅಲ್ಲಿಗೆ ಹೊದ್ಯ. ಅಲ್ಲಿ ಹೋದ್ರೆ ಗಾಯತ್ರಕ್ಕನ ಚಿಕ್ಕಪ್ಪ ಬಂದಿದ್ದ, "ಕುಡಿತ್ಯನಾ?" ಕೇಳಿದ, ಅಯ್ಯೋ ದೇವ್ರೆ, ಈ ದೇಶಕ್ಕೆ ಬಂದಮೇಲೆ ಕುಡಿಯಕ್ಕೆ ಒಳ್ಳೆ ಜೊತೆ ಇಲ್ಲೆ ಹೇಳಿ ಬೇಜಾರಲ್ಲಿದ್ದ ನಂಗೆ ಒಳ್ಳೆ ಜೊತೆ ಸಿಕ್ಕಿದ ಹಂಗಾತು ಹೇಳಿ, "ಓಕೆ! ಅಂಕಲ್" ಅಂತ ಹೇಳಿದಿ, ಅವ್ರು ವೋಡ್ಕ ಬಾಟ್ಲಿಯಿಂದ ಸುಮಾರು ಸುರ್ದ ಕೂಡ್ಲೆ, ಸಾಕು ಅಂಕಲ್, ನಿಂಬು ಇದ್ರೆ ಹಾಕಿ ಅಂತ ಹೇಳಿದಿ. ಅವ್ರು ಫುಲ್ ತಂಡ್! "He is a seasonal drinker! you see" ಅಂತ ಎಲ್ಲರಿಗೂ ಹೇಳದಾ? ಎಂಗೆ ನಾಚ್ಕೆ! ಮಳ್ಳನ, 70 ವರ್ಷ ಆದವ್ರು, ಕುಡ್ದು ಸುಮಾರು ಅನುಬವ ಇರೋರು ಈ ತರ ಹೇಳಿದ್ರೆ ಎಂತಾಗಡ? ಅಲ್ಲಿ ನನ್ನ ಬಗ್ಗೆ ಒಳ್ಳೆ (ಅಂದ್ರೆ 'ತಮ್ಮ' ಅನ್ನೊ) ಬಾವನೆ ಇಟ್ಕೊಂಡ ಕೆಲಾವೊಬ್ರು ಫುಲ್ ಶಾಕ್! ಸುಮ್ನೆ ಹೇಳದಲ್ಲ, ನಾನು ಹೆಂಡದ್ ಅಂಗಡಿಲಿ ನೊಡ್ದೆ ಇರ ಬ್ರಾಂಡೆಲ್ಲ ಅಲ್ಲಿದ್ದಿದ್ದ, ತೀರ ಬೇಡ ಹೇಳಕ್ಕೆ ಮನ್ಸು ಬರ್ಲೆ, "ಆಗ್ಲಿ ಅಂಕಲ್! ಯೇನೊ, ನಿಮ್ಗೆ ಕಂಪನಿಗೆ ಅಂತ ಸ್ವಲ್ಪ ಇರ್ಲಿ" ಅಂತ ಹೇಳಿ ಕುಡಿಯಕ್ಕೆ ಕೂತಿ. ಒಳ್ಳಿ ರುಚಿ ರುಚಿ ಅಡ್ಗೆ, ಅದ್ಕೆ ತಕ್ಕ ಹಂಗೆ ಹಪ್ಳ, ಮಸಾಲ ಪುರಿ, ಅದು ಇದು ಹೇಳ ಒಳ್ಳೆ ಜೊತೆ ಆತು. ಅಂಕಲ್ ಬೇರೆ ಅವ್ರ ಅನುಬವದ ಒಳ್ಳೋಳ್ಳೆ ಕಥೆ ಹೇಳ್ತಾ ಇದ್ದ, ಕೇಳ್ತಾ ಕೇಳ್ತಾ ವೊಡ್ಕ ಬಾಟ್ಲಿ ಪೂರ್ತಿ ಖಾಲಿ ಆಗಿ ಅಂಕಲ್ ವೈನ್ ಬಾಟ್ಲಿ ತೆಗ್ದ. ಸ್ವಲ್ಪ ಹೊತ್ತು ಬಿಟ್ಟು ಅದೂ ಖಾಲಿ :ಓ, ಎಂತಾರು ಹೇಳು, ಇಷ್ಟೆಲ್ಲದರ ಮದ್ಯ ಬಂದ ವಿಚಾರಗಳು ಬಹು ಮುಖ್ಯವಾದುದ್ದಾಗಿತ್ತು. ಮಕ್ಕಳು, ಅವರ ಬೆಳವಣಿಗೆ, ಅದಕ್ಕಾಗಿ ಅಪ್ಪ ಅಮ್ಮ ಏನೇನು ತ್ಯಾಗ ಮಾಡಬೇಕಾಗುತ್ತದೆ, ಮುಂತಾದವುಗಳು. ಒಟ್ಟಾರೆ ಇಲ್ಲಿ ಬಂದ ಮೇಲೆ ಕಳೆದ ಒಂದು ಸುಂದರ ಸಂಜೆ

ಭಾನುವಾರ, ಜೂನ್ 15, 2008

ಒಂಟಿತನ - ೧

ಇಲ್ಲಿಗೆ ಬಂದು ಮೂರುವರೆ ತಿಂಗಳಾಯಿತು! ನನ್ನ ಜೀವನದಲ್ಲಿ ಇದೆ ಮೊದಲ ಬಾರಿಗೆ ನಾನು ಇಷ್ಟು ದಿನಗಳ ಕಾಲ ಒಂಟಿಯಾಗಿ ಕಳೆದಿದ್ದೆನೆ. ಬಹುಷಃ ಇನ್ನು ಬಹುದಿನಗಳನ್ನು ಇದೆ ರೀತಿಯಲ್ಲಿ ಕಳೆಯ ಬೇಕಾಗುತ್ತದೆ :(

ನಾನು ಎನನ್ನಾದರು ಅತ್ಯಂತ ಹೆಚ್ಚಾಗಿ ದ್ವೇಷಿಸೋದಿದ್ದರೆ ಅದು 'ಒಂಟಿತನ'. ಮಾನಸಿಕ ಒಂಟಿತನ. ನಾನು ಕೆಲವೊಮ್ಮೆ 5-6 ದಿನಗಳು ಮನೆಯಿಂದ ಹೊರಗೆ ಹೊಗದೆ, ಬರಿ ಹಾಸಿಗೆಯ ಮೇಲೆ ಒರಗಿ ದಿನಗಟ್ಟಲೆ ನನ್ನ ಲ್ಯಾಪ್ಟಾಪ್ ನ ಕೀಲಿಪಟ ಒತ್ತುತ್ತ, ಕಪ್ಪು ಪರದೆಯ ಮೇಲೆ ಬರುವ log messages ನೊಡುತ್ತಾ, emacs ನಲ್ಲಿ ಕೋಡ್ ಬರೆದು, compile ಮಾಡಿ, memory leaks ಇದ್ಯಾ ನೊಡ್ಕೊತಾ ಕಳೆದಿದ್ದಿದೆ. ನಾನು ಬರೆದ ಕೋಡ್ ನಲ್ಲಿ ಏನೋ ಸರಿ ಇಲ್ಲ ಅನಿಸಿದರೆ ರಾತ್ರೆಯಲ್ಲ ಅದರ ಬಗ್ಗೆನೆ ಯೋಚಿಸುತ್ತಾ ಮಲಗಿ ಬೆಳ್ಳಿಗ್ಗೆ ಎದ್ದು, ಆ bug fix ಮಾಡಿದ್ದಿದೆ. ನನಗೆ ಕೆಲಸದ ಬಗ್ಗೆ ಇಲ್ಲಿಯವರೆಗೆ ಬೇಜಾರಾಗಿಲ್ಲ. ಕಳೆದ ಎರಡು ವರ್ಷದಲ್ಲಿ ಬಹುಷಃ 20ಕ್ಕೂ ಹೆಚ್ಚು ದೇಶಗಳ ಜನ ಪರಿಚಯ ಆಗಿದ್ದಾರೆ. ಎಲ್ಲವೂ ಸಂತೋಷಮಯ. ಎರಡೇ ವರ್ಷದ ಹಿಂದೆ ನನ್ನ ಸ್ನೇಹಿತ ಅವತಿ ನನ್ನನ್ನು "ನಮ್ಮ ಕಂಪನಿಗೆ ಬರ್ತೀಯಾ?" ಅಂತ ಕೇಳಿದಾಗ, "ಖಂಡಿತಾ!" ಎಂದು ಕ್ಷಣ ಮಾತ್ರದಲ್ಲಿ ಉತ್ತರಿಸಿದ್ದೆ. ಅಂದು ಕಂಪನಿಯಲ್ಲಿದ್ದಿದ್ದು ಬರಿ 5 ಜನ, (3 ಜನ ಬಾರತದಲ್ಲಿ, ಇಬ್ಬರು us ನಲ್ಲಿ). ಅಲ್ಲಿಂದ ಮುಂದೆ ನಮಗೆ ಗೊತ್ತಿರೋ, ನಮ್ಮ ಜೊತೆ ಆ ಮೊದಲು ಇದ್ದ ಹುಡುಗರನ್ನ ಸೇರಿಸಿಕೊಂಡು, ಈಗ ಕಂಪನಿಯಲ್ಲಿ ೧೫ ಜನ ಇದ್ದಿವಿ. ಈ ಎರಡು ವರ್ಷದಲ್ಲಿ, ಕೆಲಸ ಯಾವಾಗಲೂ ಇದ್ದೆ ಇತ್ತು. (ಈಗಲೂ ಇದೆ, ಇನ್ನೂ ಸುಮಾರು ಕಾಲ ಇದ್ದೆ ಇರುತ್ತದೆ). ಇದೆಲ್ಲಾ ಯಾಕೆ ಹೇಳಿದೆ ಅಂದ್ರೆ, ನನಗೆ ಒಂದು ವಾರ ರಜಾ ಕೊಟ್ಟು, ಈ ವಾರ ಸುಮ್ಮನೆ ಮನೆಯಲ್ಲೆ ಇರು ಅಂತ ಹೇಳಿದ್ರೆ ಬಹುಷಃ ಬಹಳ ಕಷ್ಟ ಆಗುತ್ತೆ.

"ಅಲ್ದಪ! ಬರಿ ಕೆಲ್ಸ ಒಂದೆ ಮಾಡಕ್ಕೆ ಬೇಜಾರು ಬತಲ್ಯಾ?", ಜನ ಕೆಳ್ತಾನೆ ಇರ್ತ ನನ್ನ. ಹೌದು, ಬರಿ ಕೆಲಸ ಒಂದೆ ಮಾಡ್ಲಿಕ್ಕೆ ಕಷ್ಟ. ಅದಕ್ಕೆ ನಾನು ಒಂಟಿತನ ಕಾಡ ಬಾರದು ಅಂತೇಳಿ, ಇಲ್ಲೆ ಇರೊ gymಗೆ ಹೊಗ್ತಿ. ಟೊರೆಂಟ್ ಇಂದ ಮೂವಿ ಡೌನ್ಲೊಡ್ ಮಾಡಿ ನೊಡ್ತಿ, youtube ಇಂದ ಸಾಲ್ಸ steps ನೋಡಿ ಕಲಿತಿದ್ದಿ. tennis ಮ್ಯಾಚ್ ಇದ್ರೆ ನೊಡ್ತಿ. ಪುಸ್ತಕ ಒದ್ತಾ ಇರ್ತಿ. skate board ಒಂದು ಸುಮಾರು ಚೆನಾಗೆ ಕಲ್ತಿದ್ದಿ. i am happy :D but is this enough?

ಹೌದು! ಏನೊ ಒಂದು ಕೊರತೆ ಕಾಡುತ್ತೆ. ವಯಸ್ಸು ಬಡ್ಡಿಮಗಂದು, ಮನಸ್ಸು ಏನೇನೊ ಬಯಸುತ್ತೆ. ಬೇಜಾರಾದಾಗ ಗಂಟೆಗಟ್ಟಲೆ ಮಾತಾಡಲು ಇನ್ನೊಂದು ಜೀವದ ನಿರೀಕ್ಷೆ. ಆದರೆ ನನಗೆ ಗೊತ್ತು, ಈ ಒಂದು ವಿಷಯವಾಗಿ ನಾನೆ ಇನ್ನು ತಯಾರಿಲ್ಲ.. ಇನ್ನೆರಡು ವರ್ಷಗಳಲ್ಲಿ ಕೈಲಿ ಸ್ವಲ್ಪ ದುಡ್ಡುಮಾಡಿ, ಬಾರತಕ್ಕೆ ಬಂದ್ರೆ ಅಗ ಈ ಬಗ್ಗೆ ಯೋಚಿಸೋಣ.

ಶನಿವಾರ, ಮೇ 17, 2008

Pangea Day and Hope

It was a great feeling after watching this 4hr long program. I couldn't watch it live, but watched it online later. This program changed a bit of my view points on lot of things. One of the good programs I have watched in a long time. I would recommend them to all :)

Full program online - ಸಂಪೂರ್ಣ ಕಾರ್ಯಕ್ರಮ

Videos - ಸಣ್ಣ ಚಲನಚಿತ್ರಗಳು

ಶುಕ್ರವಾರ, ಮೇ 9, 2008

ಕ್ಷಮಿಸಿ ಬಿಡಮ್ಮ

ಬಂಧನ(bonding)! ನಂಟು(relate)! ಈ ಎರಡು ಶಬ್ದಗಳಿಂದ ಕನ್ನಡದಲ್ಲಿ ಬಹುತೇಕ ಪದಗಳು ಹುಟ್ಟಿಕೊಂಡಿವೆ. ಏನೇನು ಶಬ್ದಗಳು ಇರಬಹುದು ಅಂತ ಯೊಚಿಸ್ತ ಹೋದೆ, ಸಂಭಂಧ, ಬಂದು, ಭಾಂದವ್ಯ, ನೆಂಟ,ನೆಂಟಸ್ತಿಕೆ, ಇತ್ಯಾದಿ, ಇತ್ಯಾದಿ. "ಹೌದು, ಯಾಕಪ್ಪ ಇವೆಲ್ಲ ನೆನ್ಪಾಯ್ತು ನಿಂಗೆ" ಅಂತ ನೀವು ಕೇಳ್ಬೋದು. ಈ ಪದಗಳ ಬಗ್ಗೆ ನಾನು ಸುಮಾರಷ್ಟೆ ಯೋಚ್ನೆ ಮಾಡ್ತಾ ಇರ್ತಿನಿ. "ಅಪ್ಪಿ, ತಲಿಗೆ ಹಚ್ಚಕಳ್ಳಡ" ಅಂತ ನಿಂಗ ಹೇಳ್ತಿ ಅಂತ ನಂಗೆ ಗೊತಿದು. ಅದ್ರು ನಾ ಯೆಂತಕ್ಕೆ ಈ ವಿಚಾರಗಳ ಬಗ್ಗೆ ಯೋಚ್ನೆ ಮಾಡ್ತ್ನಪ್ಪ ಅಂದ್ರೆ, ನನ್ನಲ್ಲಿ ಆ 'ಬಂದನ' ಅನ್ನ ಬಾವನೆ ಕಡ್ಮೆ. ನನ್ನ ಮಂತ್ರ ಅದು, 'life moves on', ಹಂಗಂತ, ನನ್ನ ನಂಟು ಎಲ್ಲಿದು ಅಂದ್ರೆ, ಹೇಳದು ಸುಮಾರಷ್ಟೆ ಕಷ್ಟ. ಹುಟ್ಟಿದ್ದು ಮಲೆನಾಡಮಡಿಲ ಹವ್ಯಕ ಒಟ್ಟುಸಂಸಾರದಲ್ಲಿ. ಹತ್ತು ವರ್ಷಗಳ ನಂತರ ನವೋದಯ ವಿದ್ಯಾಲಯದಲ್ಲಿ ಜೀವನ. ಅಲ್ಲಿ 7 ವರ್ಷಗಳು ಕಳೆದ ನಂತರ 4 ವರ್ಷಗಳು ಮೈಸೂರಿನಲ್ಲಿ ಕಂಪ್ಯೂಟರ್ ತಾಂತ್ರಿಕ ವಿದ್ಯಾಭ್ಯಾಸ. ನಂತರದಲ್ಲಿ, 4 ವರ್ಷಗಳು ನಮ್ಮ ಬೆಂಗಳೂರು ಮಹಾನಗರಿಯಲ್ಲಿ. ಒಟ್ಟಾರೆ ಯೆನ್ ಭಾಷೆ ಕುಲ್ಗೆಟ್ ಹೊಗೈತ್ರಿ. ಒಂದಾ ಮಾತ್ ಹೇಳ್ ಬೇಕಂದ್ರ, ನಾನೊಬ್ಬ ಕನ್ನಡಿಗ. ಹೆಂಗಂದ್ರೂ ಬೇರೆ ಭಾಷೆ ಬರಲ್ಲ, ಅದ್ರಲ್ಲೂ ಈ ಬಡ್ಡಿಮಗಂದು ಇಂಗ್ಳಿಶು, ಮಾತಾಡಕ್ಕೆ ಬತಲ್ಯಪ. ಬರೆಯಕ್ಕೆ 'spell checkers' ಇದ್ದ, ಅಡ್ಡಿಲ್ಲೆ. ಇಲ್ದೆ ಹೊಗಿದ್ರೆ, ಕಥ್ಯಾ? ಪುಣ್ಯ ಮಾರಾಯ, BE ಮಾಡಿದ್ದಿ ಬಚಾವು, ಪಾಸಾರು ಆದಿ, ಇಲ್ದೆ ಹೊಗಿದ್ರೆ, ಊರಗೆ ತೋಟ ನೋಡ್ಕ್ಯೋತ, ಕೊಟ್ಗೆಲಿ ಎಮ್ಮೆ ಮೈ ತೊಳ್ಸ್ಗ್ಯೊತ, ಇರಕಿತ್ತು. ಹಂಗಂತ, ಊರಗೆ ಅದನ್ನ ಮಾಡದು ತಪ್ಪಾ ಕೇಳಿರೆ ತಪ್ಪಲ್ಲ. ಯೆಂಗೆ ಮೈಗಳ್ತನ ಸಣ್ಣಕಿದ್ದಾಲಿಂದನೆ ಬಯಿಂದು. ಅದ್ಕೆ ಸುಮಾರೆ ಕಷ್ಟಾಗ್ತಿತ್ತು ಹೇಳಿ ವಿಚಾರ.

"ಇಷ್ಟೆ ವಿಚಾರಾಗಿದ್ರೆ ಇಲ್ಲಿ ಒದ್ದಾಡ್ಕೊತ ಬರ್ಯದು ಯೆಂತಿತ್ತು? ಮಳ್ಳಪ" ಹೇಳಿ ನಿಂಗ ಮಾತಾಡ್ಕ್ಯತ್ತಿ, ನಂಗೊತ್ತಿಲ್ಯನ ಅಪ್ಪಿ. ಇಲ್ಕೇಳಿಲ್ಲಿ. ಬರಿ ಕನ್ನಡ ಒಂದೆ ಬರದು ನಂಗೆ ಅನ್ಕಂಡು, ಅಮೇರಿಕಕ್ಕೆ ಬಂದ್ರೆ, ಯೆನ್ನ ಬಾಸು ವಿಮಾನನಿಲ್ದಾಣದಗೆ ಸಿಕ್ಕಿದವ್ನೆ, "ಹೆಯ್! ಕೈಸೆ ಹೊ?" ಅಂತ ಕೇಳಕ್ಕಾ? ಹೊಗ್ಲಿ. ಅವ್ರ ಮನೆ ಆತು, ಎಲ್ಲರು ಹಿಂದಿ ಮಾತಾಡ್ತ, ಅವ್ರ ಜೊತೆಗೆ, ಅಲ್ಲಿ ಇಲ್ಲಿ ಸಿನೆಮಾ ನೋಡಿ ಕಲ್ತ್ಗಂಡಿದ್ ಹಿಂದಿಲಿ ಮಾತಾಡಿ ಕಳತ್ತು. ಇಲ್ಲಿ DL ತಗಳಣ ಅಂತ driving class ಗೆ ಸೇರಣ ಅಂತ ಪೊನ್ ಹಚ್ಚಿರೆ, "hello! driving school. Kevin here", ಅಂತ ಉತ್ರ. ಎಲ್ಲ ಆತು, ಶುರು ಮಾಡಣ ಅಂತ ಕ್ಲಾಸ್ಗೆ ಹೊದ್ರೆ, ಅಲ್ಲಿ ನಮ್ಮ 'ಕರಣ್ ಬಾಯಿ' ಕಲ್ಸದು. ಅವನ್ ಪ್ರಕಾರ ಯೆಂಗೆ ಡೆಲ್ಲಿನಡ :ಓ ನನ್ನ ಹಿಂದಿ ನೊಡಿರೆ ಚೆನಾಗೆ ಬತ್ತು ಹೇಳ್ತ್ನಪ್ಪ ಅವ. ಸರಿ, ಎಮ್ ಬಾಸ್ ಮನೆಲಿ ಕೆಲ್ಸಕ್ಕೆ ಹೇಳಿ ಬರವ್ಳು mexican ಅಂತ ಗೊತಾತು. ಅವ್ಳಿಗೆ 'ಹೊಲಾ! ಕೊಮೊ ಎಸ್ತಾಸ್?' ಅಂತ ಕೇಳಿರೆ ಅವ್ಳು ಎನ್ನ ಲ್ಯಾಟಿನೊ (ಹೊಯ್! ಲಾಟೀನು ಅಲ್ಲ, ಹಂಗಂತ ಇಂಗ್ಲಿಶಗೆ ಹೇಳಿರೆ, ದಕ್ಷಿಣ ಅಮೇರಿಕದವ ಅಂತ) ಅಂದ್ಕ ಬಿಟ್ಳಡ. 'ಬಿಯೆನ್ ಸೆನ್ಯೋರ್! ಇ ತು?' ಉತ್ರ. ನಾ ಹೆದ್ರಲ್ಲೆ. 'ಬಿಯೆನ್ ಬಿಯೆನ್! ಗ್ರಸಿಯಾಸ್' ಅಂದಿ. ವಿಚಾರ ಯೆಂತಪ್ಪ ಅಂದ್ರೆ, ಸ್ಪಾನಿಷ್ ಚೂರುಪಾರು ಬತ್ತು. ಉಪ್ಯೊಗ್ಸನ ಅಂತ. ಕೆಲ್ಸ್ ದವ್ಳಿಗೆ ಮಗ್ಳಿದ್ರೆ ಉಪ್ಯೊಗಕ್ಕೆ ಬತ್ತೇನ ಹೇಳಿ.

ಮುಖ್ಯ ವಿಚಾರ ಯೆತ್ಲೆತ್ಲಗೊ ಹೊತು. ಸರಿ, ಇಪ್ಪತ್ತು ಸಾವ್ರ ಮೈಲಿ ದೂರ ಬಂದಾಗ ನಾನು ಭಾರತೀಯ ಅನ್ಸ್ತು. ಯೆಂತಾರು ಹೇಳಿ. ಎಂಗೆ, ತಲೆಲಿ, ಹೃದಯದಗೆ, ರಕ್ತದಗೆ ಬರದು ಕನ್ನಡ ಒಂದೆ.

ಮೇಲಿಂದೆಲ್ಲಾ ಒದಿ ಆತಾ? ಯೆಂತ ಅನ್ಸ್ತು? ವಿಚಾರ ಇದಲ್ಲ. ಇದೆಲ್ಲಾ ಪೀಠಿಕೆ. ಮುಂದೆ ಬರಿಯೊದು ನಿಜವಿಚಾರ. ಮೇಲಿನ ವಿಚಾರಗಳನ್ನ ಒದಿದ್ರೆ ಒಂದು ಸಾಮಾನ್ಯ ಪದ ಜ್ಞಾಪಕಕ್ಕೆ ಬತ್ತಾ? ಅದು 'ಮಾತೃ', ಮಾತೃಭಾಷೆ, ಮಾತೃಭೂಮಿ, ಮಾತೃಸಂಸೃತಿ, ಇಲ್ಲೆಲ್ಲ ಇರೊದು ಒಂದೆ ಪದ 'ಅಮ್ಮ' ಅಥವಾ 'ಮಾತೆ'. ಮೊದಲೆ ಹೇಳಿದಂತೆ, ನಂಟು, ಬಂದನ, ಯೆಲ್ಲವು ಶುರು ಆಗೋದು ಅಮ್ಮನಿಂದಲೆ. ಎಲ್ಲೆ ಇರಲಿ, ಏನೆ ಮಾಡ್ಲಿ, 'ಅಮ್ಮ' ಅನ್ನೊ ಒಂದು ಬಾವನೆನ ಬದಲಾಯಿಸಲು ಸಾದ್ಯನೆ ಇಲ್ಲ. ನನ್ನ ಮಟ್ಟಿಗೆ ಹೇಳೊದಾದ್ರೆ, ನಾನು ಇಂದು ಏನಾಗಿದಿನೋ, ಮುಂದೇನಾಗ್ತಿನೊ, ಎಲ್ಲವು ನನ್ನಮ್ಮನಿಂದಲೆ. 'I miss you mom'. ಹೌದು, ಅಮ್ಮ ಮುಖ್ಯ ಅಂತ ನಾವು ಯೊಚಿಸೊದೆ ಇಲ್ಲ ಕೆಲವೊಮ್ಮೆ, ಯಾಕೆಂದ್ರೆ, 'ಅಮ್ಮ' ಅನ್ನೊ ಶಬ್ದ ಒಂದು ಸಹಜತೆ. ಅದು ಒಂದು ತರ ಬೆಚ್ಚನೆಯ ನಂಬಿಕೆ ಕೊಡುತ್ತೆ, ನನ್ನ ಏಳ್ಗೆಗೆ, ನನ್ನ ಜೇವನದ ಬಗ್ಗೆ ಒಂದು ಜೀವ ಬೇಡ್ತಾ ಇದೆ ಅನ್ನೊ ಒಂದು ನಂಬಿಕೆ. ಅಮ್ಮನಿಂದ ದೂರ ಬಂದು ಏನು ಸಾದನೆ ಮಾಡ್ತಾ ಇದಿನಿ ಅನ್ನೊ ಬಾವನೆ ಕೆಲವೊಮ್ಮೆ ಕಾಡುತ್ತೆ, ಆದರೆ, ನನ್ನಮ್ಮ ನನ್ನ 'ಬಂದನ'ಕ್ಕೆ ಒಳಪಡಿಸಿಲ್ಲ, ನಂಟಿದೆ. ಗಾಡ ನಂಟು. ಅಮ್ಮನ ದಿನದ ಈ ವಾರದಲ್ಲಿ, ಅಮ್ಮ, ನನ್ನ ಜೀವನದಲ್ಲಿ, ನಿನ್ನ ಮಹತ್ವದ ಬಗ್ಗೆ ನೆನ್ಸ್ಕೊಂಡ್ರೆ ಯೋಚನೆಗಳು ದಿಕ್ಕು ತಪ್ಪುತ್ತೆ, ಎದೆ ಬಡಿತ ಏರುಪೇರಾಗುತ್ತೆ. ಇಷ್ಟು ವರ್ಷದಲ್ಲಿ ಒಂದೆ ಒಂದು ಕಡೆ ನೀನು 'ಬೇಡ' ಅಂದಿದ್ರೆ ನನ್ನ ಜೀವನದ ದೆಸೆ ಬೆರೆಡೆ ಇರುತ್ತಿತ್ತು.
You are a perfect mother. May not be the one who took care of me so much that I never went out of your site, but surely the one who shaped my life, beautifully, to be precise. People say I am lucky, But I know, that I am lucky because you are my mother. Mom, I love you.

"ಆ ದಿನಗಳು", ಎಲ್ಲರ ಮನಸಿನಲ್ಲೂ ಒಂದಲ್ಲ ಒಂದು ಖುಷಿಕೊಡುವ ಶಬ್ದ. ಅಮ್ಮನ ವಿಚಾರವಾಗಿ ನೆನಸಿಕೊಂಡಾಗ, ತಲೆತುಂಬಾ ಇರುವ ವಿಚಾರಗಳು, ನಗೆ, ದುಃಖ, ಕಣ್ಣೀರು, ಎಲ್ಲವನ್ನೂ ಒಟ್ಟಿಗೆ ಮನಕ್ಕೆ ತರುತ್ತದೆ. ಸಣ್ಣವನಿರುವಾಗ ತಪ್ಪು ಮಾಡಿದಾಗ, ಹೊಡಿಯದೆ, ಬರಿ ಬುದ್ದಿವಾದ ಹೇಳಿ, "ಇವಂಗೆಂತಕ್ಕೆ ಎಷ್ಟೆಳಿದ್ರು ಅರ್ಥಾಗ್ತಲ್ಯಪ" ಹೇಳ್ಕೊತ ಕಣ್ಣಗೆ ನೀರು ತಂದ್ಕೊತ ಇದ್ದಿದ್ದು, ಬಿದ್ದು ಕಾಲು ಮುರಿದು ಕೊಂಡಾಗ ನನ್ನ ಶುಶೃಷೆ ಮಾಡಿದ್ದು. 7 ವರ್ಷಗಳು ನಾನು ನವೋದಯದಲ್ಲಿ ಇದ್ದಾಗ, ತಿಂಗಳ ಮೊದಲ ಭಾನುವಾರ, ಬೆಳ್ಬೆಳಿಗ್ಗೆ 4ಗಂಟೆಗೆ ಯೆದ್ದು, ತಿಂಡಿ ಕಟ್ಕಂಡು, ಹೆಚ್ಚುಕಡ್ಮೆ ನೂರು ಕಿಲೋಮಿಟೆರ್ ದೂರದ ಗಾಜನೂರಿಗೆ ಗಂಟೆಗಟ್ಟಲೆ ಬಸ್ ಕಾದು, ಒಜ್ಜೆ ಚೀಲ ಹೊತ್ಗಂಡು, ನನ್ನ/ಅಕ್ಕನ್ನ ನೋಡಕ್ಕೆ ಬರಕ್ಕೆ ನೀನು ಎಷ್ಟು ಕಷ್ಟಪಟ್ಟಿದ್ದೆ, ಅಲ್ಲಿಗೆ ಬಂದಕೂಡ್ಲೆ, ನಾನು ಬರಿ ತಿಂಡಿ ಚೀಲ ಒಂದು ತಗಂಡು, "ಅರಾಮಿದ್ಯಾ?" ಹೇಳೂ ಕೇಳ್ದೆ ಇರ್ತಿದ್ದು, ಮನೆಲಿರೊ ಹಣಕಾಸಿನ ಕಷ್ಟ ನನ್ನ ವಿಧ್ಯಾಭ್ಯಾಸಕ್ಕೆ ತೊಂದ್ರೆ ಮಾಡ್ಲಾಗ ಅಂತ, ನೀನು ಎಷ್ಟೆ ಕಷ್ಟಪಟ್ಟರೂ ಅಡ್ಡಿಲ್ಲೆ, ನಾನು ಮಾತ್ರ ಓದು ಮುಗ್ಸಕ್ಕು ಅಂತ ದೃಡನಿರ್ದಾರ ಮಾಡಿ ನನ್ನ ಓದ್ಸಿದ್ದು. ಆಮೇಲೆ ನಂಗೆ ಕೆಲ್ಸ ಸಿಕ್ಕಿದ್ ಮೇಲೆ, ಕೈಲಿ ದುಡ್ಡಿದ್ರೂ ಅಂಗಡಿಗೆ ಕರ್ಕೊಂಡು ಹೋಗಕ್ಕೆ ನಂಗೆ ಟೈಂ ಇಲ್ಲೆ ಅಂತ ನಾ ಹೇಳಿದ್ರೂ, ಒಂದು ದಿನನೂ ನನ್ನ ಮೇಲೆ ಸಿಟ್ಟು ಮಾಡ್ಕೊಳ್ದೆ, ಅಮ್ಮ, ನಿನ್ನ ತಾಳ್ಮೆ, ನಿನಗೆ ನಾನು ಕೊಟ್ಟ ದುಃಖ, ಒಟ್ಟಾರೆ ನಾನು ಈಗ ನನ್ನ ಲ್ಯಾಪ್ಟಾಪ್ನ ಪರದೆ ಮಬ್ಬಾಗಿದೆ. ಒಹ್! ಅದು ನನ್ನ ಕಣ್ಣೀರಿನಿಂದ ನಿನಗೆ ಹೇಳ್ಬೆಕಾಗಿಲ್ಲ ಅಲ್ವಾ? ನನಗೆ ಗೊತ್ತು, ನಾನು ಅಲ್ಲಿದ್ದಾಗ ನಿನಗೆ ನನ್ನ ಸಮಯದಲ್ಲೆ ಸಲ್ಲಬೇಕಾದ ಪಾಲು ಕೊಟ್ಟಿಲ್ಲ ಅಂತ, ಕ್ಷಮಿಸಮ್ಮ. ಆದರೆ ನನಗೆ ಗೊತ್ತು, ನನ್ನ ಮನಸಾರೆ ನಿನಗೆ ಹೇಳುತಿದ್ದೇನೆ, ನನ್ನ ಸಮಯದ ಪಾಲನ್ನ ನಿನಗೆ ಮೀಸಲಿಡುತ್ತೆನೆ.

ನನಗೆ ಈಗ ಅರ್ಥವಾಗ್ತಾ ಇದೆ, ಜನಕ್ಕೆ ಯಾಕೆ 'ಅಮ್ಮನ ದಿನ', 'ಅಪ್ಪನ ದಿನ', 'ಮಕ್ಕಳ ದಿನ', 'ಅಕ್ಕನ ದಿನ', 'ಗೆಳೆಯರ ವಾರ' ಗಳು ಬೇಕು ಅಂತ. ಬಹುತೇಕ ಜನ ಕೆಲಸ, ಅದುಇದು ಅಂತ, ತಮ್ಮನ್ನ ತಾವೆ ಮರೆತಿರುತ್ತಾರೆ, ಅವರಿಗೆ ಇಂಥ ದಿನಗಳು ಬೇಕು. ಈ ಮೊದಲು ನನ್ನ ಪ್ರಕಾರ ಆ ತರಹದ ಜನ ಕಡ್ಮೆ, ಆದ್ರೆ ಈಗ, ನಾನೆ ಅವರಲ್ಲಿ ಒಬ್ಬ, ಮತ್ತು ಈ ತರಹದ ಜನರು ತುಂಬಾ ಇದ್ದಾರೆ ಎಂದು ಅರಿವಾಗಿದೆ. ನಮ್ಮನ್ನು ಇಷ್ಟ ಪಡುವವರನ್ನು ವರ್ಷದಲ್ಲಿ ಒಮ್ಮೆನಾದ್ರೂ ನೆನ್ಪಸ್ಕೋ ಬೇಕು.

ಅಮ್ಮಾ, ಈ ಲೇಖನ ನಿನಗೆ ಸಮರ್ಪಣೆ.

ಮಂಗಳವಾರ, ಮೇ 6, 2008

ಅತಿ ಆಸೆ ಗತಿಗೇಡು

ಇವತ್ತು ನಾನು, ಪ್ರಸಾದ್ ಹೆಗಡೆ ಲೋಕಾರೂಡಿ ಇ-ಹರಟೆ ಹೊಡಿತಾ ಇದ್ದಿದ್ಯ. ಮಾತಾಡ್ತ, ಮಾತಾಡ್ತ ಮದುವೆ, ಜೀವನ ಅಂತ ವಿಚಾರ ಬಂತು. ನಂಗ್ಳಿಬ್ರ ಯೋಚ್ನೆನು ಸುಮಾರು ಒಂದೆ ತರ ಇತ್ತು. ಅದಕ್ಕೆ, ನಂಗ ಇಬ್ರೆ ಈ ತರ ಯೋಚ್ನೆ ಮಾಡದ, ಅಥ್ವ ನಿಂಗನೂ ಯಾರಾದ್ರು ಹಿಂಗೆ ಯೋಚ್ನೆ ಮಾಡ್ತ್ರ ಹೇಳಿ ಕೇಳಕ್ಕಿತ್ತು.

ಹೌದು, ಅವತ್ತು ಎನ್ನ ಗೆಳ್ತಿ ಒಬ್ಳು ಹೇಳಿದಂಗೆ ಎನ್ನ ಆಸೆ ಸ್ವಲ್ಪ ಹೆಚ್ಚ್ಗೆನೆ ಇದ್ದು. ಹುಡ್ಗಿ ಚೆನಾಗಿರಕ್ಕು, ಸ್ವಂತಕ್ಕೆ ನಿರ್ದಾರ ತಗಳ ಹಂಗೆ ಇರಕ್ಕು, ಪುಸ್ತ್ಕ, ತಿರ್ಗಾಟ ಅಂದ್ರೆ ಇಷ್ಟ ಇರಕ್ಕು, ಅಡ್ಗೆ ಮಾಡಕ್ಕೆ ಬರಕ್ಕು, ಹೇಳ್ತಾ ಹೊದ್ರೆ ಪುಸ್ತ್ಕ ಬರಿಲಕ್ಕು. ಅಲ್ಲ, ನಿಂಗನೆ ಹೇಳಿ, ಎನ್ನ ಗುರಿ ಎತ್ರಕ್ಕೆ ಇಟ್ರೆ ತಪ್ಪಾ? ಹಂಗಂತ ಎನ್ಗಂತೂ ಎಂತ ಗಡಿಬಿಡಿ ಇಲ್ಲೆ. ದಿನ, ಹೊಗ್ಲಿ, ವರ್ಷನೆ ಬಾಕಿ ಇದ್ದು. ಆದ್ರು ಒಂದು ಪ್ರಶ್ನೆ ಮಾತ್ರ ಉತ್ತ್ರಿಲ್ದೆ ಉಳ್ದೊಗ್ತು ಹೇಳಿ ಬೇಜಾರು.

ಹೊಗ್ಲಿ, ಅಪ್ಪಿತಪ್ಪಿ ಅಲ್ಲಿಇಲ್ಲಿ ಒಬ್ಬೊಬ್ರು ಹುಡ್ಗಿರು ಇಷ್ಟ ಆದ್ರೂ, ಅವ್ರಿಗೆ ಮದ್ವೆ ಆಗಿರ್ತು ಅಥ್ವ, ಮಾಣಿ ನಿಶ್ಚಯ ಮಾಡ್ಕಂಡಿರ್ತ. ಒಟ್ಟಾರೆ, ಯೆಂಥೊ ಸರಿ ಇಲ್ಲೆ :(

ಕೆಲ್ವೊಮ್ಮೆ, ಗಿರಿ ಭಾವಯ್ಯನ status ನೆನ್ಪಾಗ್ತು. 'If you aim at nothing, you hit everytime' ಆ ತರ ಯೋಚ್ನೆ ಮಾಡಿದ್ರೆ, ಯೆಲ್ಲಾ ಹುಡ್ಗಿರೂ ಇಷ್ಟ ಆಯಕ್ಕು. ಆದ್ರೆ, ಎನ್ನ ಜಾಯ್ಮಾನ ಅಲ್ಲ ತಗ ಅದು. ಎನ್ನ ಗುರಿ ಯಾವಾಗ್ಲೂ ಮೇಲೆಯ. ನಾ ಶುರು ಮಾಡದೆ ಆಗೆ ಆಗ್ತು ಹೇಳ್ಕ್ಯೊತ. ಯೆಂತಾರು ಆಗ್ಲಿ. ಗುರಿ ಮುಟ್ತಿ ಹೇಳಿ ನಂಬ್ಕೆ.

ಹೊಯ್! ಅಮ್ಮಿ, ನೀ ಯೆಂತಾರು ಇದನ್ನ ಒದಿದ್ರೆ, ಬೇಜಾರಾಗಡ, ನೀ ಯೆಂಗೆ ಇಷ್ಟ ಆಗ್ದೆ ಇರಕ್ಕೆ ಸುಮಾರು ಕಾರಣ ಇದ್ದಿಕ್ಕು. ಗೊತಿದಲ, ನಾ ಒಂತರ ಹುಚ್ಚ ಮೊದ್ಲೆ. ಬೊಷ ನಾನು ನೀನು ತೀರ ಇಷ್ಟ ಆಗ ಅಷ್ಟು ಒಟ್ಟಿಗೆ ಒಡಾಡಲ್ಲೆ ತಗ. :| ನೋಡಣ, ಸದ್ಯಕ್ಕಂತು ಆನು ಸಿಕ್ಕಾಪಟ್ಟೆ ಕೆಲ್ಸ ಮಾಡಣ ಅಂತ ತೀರ್ಮಾನ ತಗಂಡು ಆಯ್ದು. ಇನ್ನೊಂದು ೨-೩ ವರ್ಷದಗೆ ಕೋಟ್ಯಾಧೀಶ ಆಪ ಅಂದಾಜಿದ್ದು ಯೆಂಗೆ. ದುಡ್ಡಿದ್ರಾರು ತಲೆ ಇರೊ ಹುಡ್ಗಿ ಸಿಗ್ತಾಳ ನೋಡಕ್ಕು. (ನೀವು ತಲೆ ಇರೋ ಹುಡ್ಗಿ ಆಗಿದ್ರೆ, ಕ್ಷಮೆ ಇರಲಿ. mostly ನಿಮ್ಮನ್ನ ನಾನು ಬೇಟಿ ಆಗಿಲ್ಲ, ಅಥವಾ ನಿಮಗೆ ತಲೆ ಇದೆ ಅಂತ ನನಗೆ ಗೊತ್ತಾಗಿಲ್ಲ)

ಟಿಪ್ಪಣಿ: ಇದು ಯಾರದ್ದೆ ಮನಸಿಗೆ ನೋವಾಪಲೆ ಬರೆದ ಇ-ವಿಚಾರವಲ್ಲ. ನನ್ನ ಅನಿಸಿಕೆಗಳ ಬಗ್ಗೆ ತಮಗೆ ಅಸಮಾದಾನವಿದ್ದಲ್ಲಿ, ನನ್ನಲ್ಲಿ ನೇರವಾಗಿ ಅರಹಿಕೊಳ್ಳಬೇಕಾಗಿ ವಿನಂತಿ.